ನಟ ಕಮಲ್ಅದೊಂದು ಕಾಡಿನಲ್ಲಿ,ಕಾಡಿನ ರಾಜನಾದ `ಸಿಂಹ’ದ ಆಡಳಿತವಿತ್ತು. ಅದು ಕಾಡಿನ ಮೃಗಗಳಿಗೆ ಯಾವುದೇ ಕುಂದು ಕೊರತೆಗಳು ಬರದಂತೆ ನೋಡಿಕೊಳ್ಳುತ್ತಿತ್ತು. ಅವು ಸಹ ಅದರ ಆಜ್ಞೆಗಳನ್ನು ಶಿರಸಾವಹಿಸಿ ಪಾಲಿಸುತ್ತಿದ್ದವು. ಹೀಗಿರಲು ಒಂದು ಸಲ…
“ಮೃಗರಾಜ, ನರಿಯು ನನ್ನ ಮರಿಗಳಿಗೆ ಸಂಗ್ರಹಿಸಿಟ್ಟಿದ್ದ ಜೇನುತುಪ್ಪವನ್ನು ಕಬಳಿಸಿದೆ; ಅದಕ್ಕೆ ತಕ್ಕ ಶಿಕ್ಷೆಯನ್ನು ವಿಧಿಸಬೇಕು!” ಎಂದು ಕರಡಿಯೊಂದು ಮೃಗರಾಜನ ಆಸ್ಥಾನಕ್ಕೆ ಬಂದು ದೂರು ಸಲ್ಲಿಸಿತು. ಅದಾದ ಕೆಲವೇ ನಿಮಿಷಗಳಲ್ಲಿ ಮೊಲವೊಂದು ಬಂದು…
“ಮೃಗರಾಜ ನರಿಯು ನನ್ನ ಮರಿಗಳನ್ನು ಭಕ್ಷಿಸಿದೆ; ನನಗೆ ನ್ಯಾಯ ಕೊಡಿಸಬೇಕು!” ಎಂದು ಅಲವತ್ತುಕೊಂಡಿತು! “ಮೇಲಿಂದ ಮೇಲೆ ನರಿಯ ಮೇಲಿನ ಆರೋಪಗಳನ್ನು ಕೇಳಿಸಿಕೊಂಡ ಮೃಗರಾಜನ ಪಿತ್ತವು ನೆತ್ತಿಗೇರಿತು. ನರಿಯನ್ನು ಕೂಡಲೇ ತನ್ನ ಆಸ್ಥಾನಕ್ಕೆ ಬರಮಾಡಿಕೊಂಡಿತು. ನರಿಯು ಇನ್ನು ನನ್ನ ಕಥೆಯು ಮುಗಿಯಿತು; ಎಂದು ಮೃಗರಾಜನ ಆಜ್ಞೆಗೆ ಓಗೊಟ್ಟು ಆಸ್ಥಾನಕ್ಕೆ ಧಾವಿಸಿತು. ಅದು ಯಾವ ಕಾರಣವನ್ನು ನೀಡದೆ ತನ್ನ ತಪ್ಪು ಒಪ್ಪಿಕೊಂಡಿತು. ಅದರಂತೆ ಯಾವ ಶಿಕ್ಷೆಗೂ ಸಿದ್ಧನಿದ್ದೇನೆ! ಎಂದು ತಲೆತಗ್ಗಿಸಿತು!
ಮೃಗರಾಜ… “ನಿನಗೆ ಈ ಕಾಡಿನಿಂದ ಬಹಿಷ್ಕಾರವನ್ನು ಹಾಕಿದ್ದೇನೆ!” ಎಂದು ಹಿಂದು ಮುಂದು ಯೋಚಿಸದೆ ತನ್ನ ತೀರ್ಪನ್ನು ಪ್ರಕಟಿಸಿತು. ಅದರ ತೀರ್ಪಿಗೆ ಆಸ್ಥಾನದಲ್ಲಿ ನೆರೆದಿದ್ದ ಕಾಡಿನ ಪ್ರಾಣಿಗಳೂ… ಸಂತ್ರಸ್ತರೂ.. ಖುಷಿಗೊಂಡು ಮೃಗರಾಜನಿಗೆ ಜೈಕಾರವನ್ನು ಹಾಕಿದವು!
ನರಿಯು ವಿಧಿ ಇಲ್ಲದೆ ಪಕ್ಕದ ಕಾಡಿನಲ್ಲಿ ನುಸುಳಬೇಕೆಂದು ಬಂದಿತು. ಆದರೆ ಪಕ್ಕದ ಕಾಡನ್ನು ಪ್ರವೇಶಿಸಬೇಕಾದರೆ ಕಾಡಿನ ಮಧ್ಯೆದಲ್ಲಿ ರಭಸವಾಗಿ ಹರಿಯುತ್ತಿರುವ ನದಿಯನ್ನು ದಾಟಬೇಕಿತ್ತು! ನದಿಯ ವೇಗವು ತಗ್ಗುವವರೆಗೂ ಅದು ದಡದ ಮೇಲೆ ಕುಳಿತಿತು. ಇದೇ ಅವಕಾಶಕ್ಕಾಗಿ ಕಾದು ಕಾದು ಕುಳಿತ ಮೊಸಳೆಯೊಂದು ನರಿಯ ಸನಿಹವೇ ಬಂದಿತು. ಮೊಸಳೆಯ ಆಕಸ್ಮಿಕ ಆಗಮನದಿಂದ ನರಿಯು ಬೆಚ್ಚಿತು. ಅದು ತನ್ನನ್ನೆ ಹೊಂಚು ಹಾಕುತ್ತಿರುವ ಸಂಗತಿ ನರಿಗೆ ಮನದಟ್ಟಾಯಿತು. ನರಿಯನ್ನು ಉಪಾಯದಿಂದ ಕಬಳಿಸಬೇಕು; ಇಲ್ಲದಿದ್ದರೆ ಅದು ತಪ್ಪಿಸಿಕೊಳ್ಳುವ ಸಂಭವವುAಟು! ಎಂದು ಮೊಸಳೆಯು ಲೆಕ್ಕ ಹಾಕಿತು. ಅಷ್ಟರಲ್ಲಿ ನರಿಯು ದೂರ ಸರಿದು ನಿಂತುಕೊAಡಿತು.
ಮೊಸಳೆ… “ಏನು ತಮ್ಮಾ, ಪಕ್ಕದ ಕಾಡಿಗೆ ಹೋಗಬೇಕೆಂದಿರುವೆಯಾ? ನದಿಯ ವೇಗಕ್ಕೆ ನೀನು ನೀರಿಗೆ ಇಳಿದರೆ ಕೊಚ್ಚಿಕೊಂಡು ಹೋಗಬೇಕಾಗೀತು; ಅದಕ್ಕೆ ನಾನಿಲ್ಲವೇ? ಹಾಗಾದರೆ ತಡವೇಕೆ? ನನ್ನ ಬೆನ್ನ ಮೇಲೆ ಕುಳಿತುಕೋ; ನಿನ್ನನ್ನು ಸುರಕ್ಷಿತವಾಗಿ ದಡ ಮುಟ್ಟಿಸುವೆನು.” ಎಂದು ಕುಹಕ ನೋಟ ಬೀರಿ ನುಡಿಯಿತು.
ನರಿ… “ಮೊಸಳೆಯಣ್ಣಾ, ನೀನು ಊಹಿಸಿದ್ದು ನಿಜ; ಪಕ್ಕದ ಕಾಡಿನಲ್ಲಿ ನನ್ನ ಪರಿವಾರದವರು ಅನಾರೋಗ್ಯಕ್ಕೆ ಒಳಗಾಗಿದ್ದಾರಂತೆ! ಹಾಗಾಗಿ ಅವರನ್ನು ಕೆಲವು ವಾರಗಳವರೆಗೆ ನಮ್ಮ ಕಾಡಿಗೆ ಕರೆ ತರಬೇಕೆಂದಿದ್ದೇನೆ; ಆದರೆ ಹಿಂದೊಮ್ಮೆ ಅವರು ನಮ್ಮ ಕಡುವೈರಿಗಳಾಗಿದ್ದರು; ಈಗ ಅವರನ್ನು ಮುಗಿಸುವ ಕಾಲ ಬಂದಿದೆ; ಒಬ್ಬೊಬ್ಬರನ್ನು ಸಾಗಿಸುವ ನೆಪಮಾಡಿ ಕಬಳಿಸಿಬಿಡು!” ಎಂದು ಹುಬ್ಬೇರಿಸಿತು. ನರಿಯ ನುಡಿಗಳಿಗೆ ಮೊಸಳೆಯು ಬಹುಬೇಗನೆ ಮಾರುಹೋಗಿ ಉಬ್ಬಿಹೋಯಿತು.
ಮೊಸಳೆ… “ಬೇಗ ನನ್ನ ಬೆನ್ನು ಏರಿ ಕುಳಿತುಕೋ!” ಎಂದು ಖುಷಿಯಿಂದ ಹೇಳಿತು. ನರಿಯು ಮೊಸಳೆಯಲ್ಲಾದ ಎಲ್ಲಾ ಬದಲಾವಣೆಗಳನ್ನು ಗಮನಿಸಿ, ಮೆಲ್ಲನೆ ಮೊಸಳೆಯ ಬೆನ್ನು ಏರಿ ಕುಳಿತಿತು. ಕೆಲ ನಿಮಿಷಗಳಲ್ಲಿ ನದಿಯ ದಡವು ಆಗಮಿಸುತ್ತಿದ್ದಂತೆಯೇ ನರಿಯು ಚಂಗನೆ ದಡಕ್ಕೆ ಜಿಗಿಯಿತು.
ನರಿ… “ಮೊಸಳೆಯಣ್ಣಾ, ನನ್ನ ದಡ ಮುಟ್ಟಿಸಿದ್ದಕ್ಕೆ ಧನ್ಯವಾದಗಳು; ಇಲ್ಲಿ ನನ್ನ ಪರಿವಾರದವರು ಸುರಕ್ಷಿತವಾಗಿದ್ದಾರೆ; ನಿನ್ನ ಬುದ್ಧಿಯು ನನಗೆ ತಿಳಿದಿಲ್ಲವೇ? ಅದಕ್ಕಾಗಿ ನಾನು ಚಿಕ್ಕ ನಾಟಕವಾಡಬೇಕಾಗಿ ಬಂದಿತು!”ಎAದು ಅಲ್ಲಿಂದ ಕಣ್ಮರೆಯಾಯಿತು.
ಅದೊಂದು ಕಾಡಿನಲ್ಲಿ,ಕಾಡಿನ ರಾಜನಾದ `ಸಿಂಹ’ದ ಆಡಳಿತವಿತ್ತು. ಅದು ಕಾಡಿನ ಮೃಗಗಳಿಗೆ ಯಾವುದೇ ಕುಂದು ಕೊರತೆಗಳು ಬರದಂತೆ ನೋಡಿಕೊಳ್ಳುತ್ತಿತ್ತು. ಅವು ಸಹ ಅದರ ಆಜ್ಞೆಗಳನ್ನು ಶಿರಸಾವಹಿಸಿ ಪಾಲಿಸುತ್ತಿದ್ದವು. ಹೀಗಿರಲು ಒಂದು ಸಲ…
“ಮೃಗರಾಜ, ನರಿಯು ನನ್ನ ಮರಿಗಳಿಗೆ ಸಂಗ್ರಹಿಸಿಟ್ಟಿದ್ದ ಜೇನುತುಪ್ಪವನ್ನು ಕಬಳಿಸಿದೆ; ಅದಕ್ಕೆ ತಕ್ಕ ಶಿಕ್ಷೆಯನ್ನು ವಿಧಿಸಬೇಕು!” ಎಂದು ಕರಡಿಯೊಂದು ಮೃಗರಾಜನ ಆಸ್ಥಾನಕ್ಕೆ ಬಂದು ದೂರು ಸಲ್ಲಿಸಿತು. ಅದಾದ ಕೆಲವೇ ನಿಮಿಷಗಳಲ್ಲಿ ಮೊಲವೊಂದು ಬಂದು…
“ಮೃಗರಾಜ ನರಿಯು ನನ್ನ ಮರಿಗಳನ್ನು ಭಕ್ಷಿಸಿದೆ; ನನಗೆ ನ್ಯಾಯ ಕೊಡಿಸಬೇಕು!” ಎಂದು ಅಲವತ್ತುಕೊಂಡಿತು! “ಮೇಲಿಂದ ಮೇಲೆ ನರಿಯ ಮೇಲಿನ ಆರೋಪಗಳನ್ನು ಕೇಳಿಸಿಕೊಂಡ ಮೃಗರಾಜನ ಪಿತ್ತವು ನೆತ್ತಿಗೇರಿತು. ನರಿಯನ್ನು ಕೂಡಲೇ ತನ್ನ ಆಸ್ಥಾನಕ್ಕೆ ಬರಮಾಡಿಕೊಂಡಿತು. ನರಿಯು ಇನ್ನು ನನ್ನ ಕಥೆಯು ಮುಗಿಯಿತು; ಎಂದು ಮೃಗರಾಜನ ಆಜ್ಞೆಗೆ ಓಗೊಟ್ಟು ಆಸ್ಥಾನಕ್ಕೆ ಧಾವಿಸಿತು. ಅದು ಯಾವ ಕಾರಣವನ್ನು ನೀಡದೆ ತನ್ನ ತಪ್ಪು ಒಪ್ಪಿಕೊಂಡಿತು. ಅದರಂತೆ ಯಾವ ಶಿಕ್ಷೆಗೂ ಸಿದ್ಧನಿದ್ದೇನೆ! ಎಂದು ತಲೆತಗ್ಗಿಸಿತು!
ಮೃಗರಾಜ… “ನಿನಗೆ ಈ ಕಾಡಿನಿಂದ ಬಹಿಷ್ಕಾರವನ್ನು ಹಾಕಿದ್ದೇನೆ!” ಎಂದು ಹಿಂದು ಮುಂದು ಯೋಚಿಸದೆ ತನ್ನ ತೀರ್ಪನ್ನು ಪ್ರಕಟಿಸಿತು. ಅದರ ತೀರ್ಪಿಗೆ ಆಸ್ಥಾನದಲ್ಲಿ ನೆರೆದಿದ್ದ ಕಾಡಿನ ಪ್ರಾಣಿಗಳೂ… ಸಂತ್ರಸ್ತರೂ.. ಖುಷಿಗೊಂಡು ಮೃಗರಾಜನಿಗೆ ಜೈಕಾರವನ್ನು ಹಾಕಿದವು!
ನರಿಯು ವಿಧಿ ಇಲ್ಲದೆ ಪಕ್ಕದ ಕಾಡಿನಲ್ಲಿ ನುಸುಳಬೇಕೆಂದು ಬಂದಿತು. ಆದರೆ ಪಕ್ಕದ ಕಾಡನ್ನು ಪ್ರವೇಶಿಸಬೇಕಾದರೆ ಕಾಡಿನ ಮಧ್ಯೆದಲ್ಲಿ ರಭಸವಾಗಿ ಹರಿಯುತ್ತಿರುವ ನದಿಯನ್ನು ದಾಟಬೇಕಿತ್ತು! ನದಿಯ ವೇಗವು ತಗ್ಗುವವರೆಗೂ ಅದು ದಡದ ಮೇಲೆ ಕುಳಿತಿತು. ಇದೇ ಅವಕಾಶಕ್ಕಾಗಿ ಕಾದು ಕಾದು ಕುಳಿತ ಮೊಸಳೆಯೊಂದು ನರಿಯ ಸನಿಹವೇ ಬಂದಿತು. ಮೊಸಳೆಯ ಆಕಸ್ಮಿಕ ಆಗಮನದಿಂದ ನರಿಯು ಬೆಚ್ಚಿತು. ಅದು ತನ್ನನ್ನೆ ಹೊಂಚು ಹಾಕುತ್ತಿರುವ ಸಂಗತಿ ನರಿಗೆ ಮನದಟ್ಟಾಯಿತು. ನರಿಯನ್ನು ಉಪಾಯದಿಂದ ಕಬಳಿಸಬೇಕು; ಇಲ್ಲದಿದ್ದರೆ ಅದು ತಪ್ಪಿಸಿಕೊಳ್ಳುವ ಸಂಭವವುAಟು! ಎಂದು ಮೊಸಳೆಯು ಲೆಕ್ಕ ಹಾಕಿತು. ಅಷ್ಟರಲ್ಲಿ ನರಿಯು ದೂರ ಸರಿದು ನಿಂತುಕೊAಡಿತು.
ಮೊಸಳೆ… “ಏನು ತಮ್ಮಾ, ಪಕ್ಕದ ಕಾಡಿಗೆ ಹೋಗಬೇಕೆಂದಿರುವೆಯಾ? ನದಿಯ ವೇಗಕ್ಕೆ ನೀನು ನೀರಿಗೆ ಇಳಿದರೆ ಕೊಚ್ಚಿಕೊಂಡು ಹೋಗಬೇಕಾಗೀತು; ಅದಕ್ಕೆ ನಾನಿಲ್ಲವೇ? ಹಾಗಾದರೆ ತಡವೇಕೆ? ನನ್ನ ಬೆನ್ನ ಮೇಲೆ ಕುಳಿತುಕೋ; ನಿನ್ನನ್ನು ಸುರಕ್ಷಿತವಾಗಿ ದಡ ಮುಟ್ಟಿಸುವೆನು.” ಎಂದು ಕುಹಕ ನೋಟ ಬೀರಿ ನುಡಿಯಿತು.
ನರಿ… “ಮೊಸಳೆಯಣ್ಣಾ, ನೀನು ಊಹಿಸಿದ್ದು ನಿಜ; ಪಕ್ಕದ ಕಾಡಿನಲ್ಲಿ ನನ್ನ ಪರಿವಾರದವರು ಅನಾರೋಗ್ಯಕ್ಕೆ ಒಳಗಾಗಿದ್ದಾರಂತೆ! ಹಾಗಾಗಿ ಅವರನ್ನು ಕೆಲವು ವಾರಗಳವರೆಗೆ ನಮ್ಮ ಕಾಡಿಗೆ ಕರೆ ತರಬೇಕೆಂದಿದ್ದೇನೆ; ಆದರೆ ಹಿಂದೊಮ್ಮೆ ಅವರು ನಮ್ಮ ಕಡುವೈರಿಗಳಾಗಿದ್ದರು; ಈಗ ಅವರನ್ನು ಮುಗಿಸುವ ಕಾಲ ಬಂದಿದೆ; ಒಬ್ಬೊಬ್ಬರನ್ನು ಸಾಗಿಸುವ ನೆಪಮಾಡಿ ಕಬಳಿಸಿಬಿಡು!” ಎಂದು ಹುಬ್ಬೇರಿಸಿತು. ನರಿಯ ನುಡಿಗಳಿಗೆ ಮೊಸಳೆಯು ಬಹುಬೇಗನೆ ಮಾರುಹೋಗಿ ಉಬ್ಬಿಹೋಯಿತು.
ಮೊಸಳೆ… “ಬೇಗ ನನ್ನ ಬೆನ್ನು ಏರಿ ಕುಳಿತುಕೋ!” ಎಂದು ಖುಷಿಯಿಂದ ಹೇಳಿತು. ನರಿಯು ಮೊಸಳೆಯಲ್ಲಾದ ಎಲ್ಲಾ ಬದಲಾವಣೆಗಳನ್ನು ಗಮನಿಸಿ, ಮೆಲ್ಲನೆ ಮೊಸಳೆಯ ಬೆನ್ನು ಏರಿ ಕುಳಿತಿತು. ಕೆಲ ನಿಮಿಷಗಳಲ್ಲಿ ನದಿಯ ದಡವು ಆಗಮಿಸುತ್ತಿದ್ದಂತೆಯೇ ನರಿಯು ಚಂಗನೆ ದಡಕ್ಕೆ ಜಿಗಿಯಿತು.
ನರಿ… “ಮೊಸಳೆಯಣ್ಣಾ, ನನ್ನ ದಡ ಮುಟ್ಟಿಸಿದ್ದಕ್ಕೆ ಧನ್ಯವಾದಗಳು; ಇಲ್ಲಿ ನನ್ನ ಪರಿವಾರದವರು ಸುರಕ್ಷಿತವಾಗಿದ್ದಾರೆ; ನಿನ್ನ ಬುದ್ಧಿಯು ನನಗೆ ತಿಳಿದಿಲ್ಲವೇ? ಅದಕ್ಕಾಗಿ ನಾನು ಚಿಕ್ಕ ನಾಟಕವಾಡಬೇಕಾಗಿ ಬಂದಿತು!”ಎAದು ಅಲ್ಲಿಂದ ಕಣ್ಮರೆಯಾಯಿತು.
ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲವೆಂದು ಮೊಸಳೆಯು ತನ್ನನ್ನು ತಾನೇ ಹಳಿದುಕೊಂಡಿತು!